ಕುವೆಂಪು ವೈಚಿತ್ರ್ಯ

ನಾನು ಹುಟ್ಟಿದ ವರುಷವೆ ಅವರು ತೀರಿಕೊಂಡಿದ್ದಂತೆ,ಅವರನ್ನೊಮ್ಮೆ ನೋಡಬೇಕಿತ್ತು ಎಂದು ಯಾವಾಗಲೂ ಎಂದುಕೊಳ್ಳುತ್ತಿರುವೆನು,

ಒಂದು ಕುಗ್ರಾಮ ಕುಪ್ಪಳಿ, ಕೊಪ್ಪ-ತೀರ್ಥಹಳ್ಳಿಯ ಸೇತುಬಂಧದ ಊರೆನ್ನಬಹುದು, ಅಲ್ಲಿದ್ದವರು ರಾಷ್ಟ್ರಮಟ್ಟದ ಮನ್ನಣೆ ಹೇಗೆ ಸಾಧ್ಯವಾಯಿತೆಂದು ಊಹಿಸಲಸಾಧ್ಯ,

ವಿಶ್ವಮಾನವನಾಗಿದ್ದಾದರು ಹೇಗೆ ಅಂತ,

ನನಗರಿವಾದದ್ದು ಹುಟ್ಟಿನಿಂದ ಯಾರೂ ದೊಡ್ಡವರಾಗೋದಿಲ್ಲ, ಬೆಳೆದಂತೆಲ್ಲಾ ಜ್ಞಾನ ವಿಸ್ತಾರಿಸಿಕೊಳ್ಳುವುದರಿಂದ ಎಂತಹ ದರಿದ್ರನಾದರೂ ಉತ್ತಮನೆನಿಸಿಕೊಳ್ಳುತ್ತಾನೆಂದು,

ಅವರ ಒಂದೊಂದು ಬರಹವು ಅದಾವುದೋ ಹೊಸ ವೈಚಾರಿಕತೆಯ ಹೊತ್ತು , ಅದೆಷ್ಟೋ ಮೂಢತೆಗಳ ಮೌಢ್ಯಗಳ ನಡುವೆಯೇ, ಬೇವಿನ ಮರದ ತಂಪ ಘಮಲ ತೀಡಿ ಸೂಸುವ ಘಮಲು ಇಂದಿಗೂ ಜೀವಂತ,

ಆ ಪ್ರಶಾಂತ ವನದ ಚೌಕಿಮನೆಯನ್ನ, ಅದರಲ್ಲಿನ ಸೊಗಡನ್ನ ಪ್ರತಿಯೋರ್ವರು ನೋಡರಿತು ತಲ್ಲೀನರಾಗಲು

ಒಮ್ಮೆಯಾದರು ಭೇಟಿ ಕೊಡದೆ ಇರಬೇಡಿ..

ತೀರ್ಥಹಳ್ಳಿಯ ದೇವಂಗಿ ಮಾರ್ಗದಿಂದ ೨೦ಕಿಲೋಮೀಟರು ಅನತಿಯಲ್ಲಿದೆ

ಕುಪ್ಪಳಿ

ಹಿರೇಕೊಡಿಗೆ,ಕೊಪ್ಪ ತಾಲ್ಲೂಕು

ಚಿಕ್ಕಮಗಳೂರು .

Leave a comment

Blog at WordPress.com.

Up ↑