ನಾನು ಹುಟ್ಟಿದ ವರುಷವೆ ಅವರು ತೀರಿಕೊಂಡಿದ್ದಂತೆ,ಅವರನ್ನೊಮ್ಮೆ ನೋಡಬೇಕಿತ್ತು ಎಂದು ಯಾವಾಗಲೂ ಎಂದುಕೊಳ್ಳುತ್ತಿರುವೆನು,
ಒಂದು ಕುಗ್ರಾಮ ಕುಪ್ಪಳಿ, ಕೊಪ್ಪ-ತೀರ್ಥಹಳ್ಳಿಯ ಸೇತುಬಂಧದ ಊರೆನ್ನಬಹುದು, ಅಲ್ಲಿದ್ದವರು ರಾಷ್ಟ್ರಮಟ್ಟದ ಮನ್ನಣೆ ಹೇಗೆ ಸಾಧ್ಯವಾಯಿತೆಂದು ಊಹಿಸಲಸಾಧ್ಯ,
ವಿಶ್ವಮಾನವನಾಗಿದ್ದಾದರು ಹೇಗೆ ಅಂತ,
ನನಗರಿವಾದದ್ದು ಹುಟ್ಟಿನಿಂದ ಯಾರೂ ದೊಡ್ಡವರಾಗೋದಿಲ್ಲ, ಬೆಳೆದಂತೆಲ್ಲಾ ಜ್ಞಾನ ವಿಸ್ತಾರಿಸಿಕೊಳ್ಳುವುದರಿಂದ ಎಂತಹ ದರಿದ್ರನಾದರೂ ಉತ್ತಮನೆನಿಸಿಕೊಳ್ಳುತ್ತಾನೆಂದು,
ಅವರ ಒಂದೊಂದು ಬರಹವು ಅದಾವುದೋ ಹೊಸ ವೈಚಾರಿಕತೆಯ ಹೊತ್ತು , ಅದೆಷ್ಟೋ ಮೂಢತೆಗಳ ಮೌಢ್ಯಗಳ ನಡುವೆಯೇ, ಬೇವಿನ ಮರದ ತಂಪ ಘಮಲ ತೀಡಿ ಸೂಸುವ ಘಮಲು ಇಂದಿಗೂ ಜೀವಂತ,
ಆ ಪ್ರಶಾಂತ ವನದ ಚೌಕಿಮನೆಯನ್ನ, ಅದರಲ್ಲಿನ ಸೊಗಡನ್ನ ಪ್ರತಿಯೋರ್ವರು ನೋಡರಿತು ತಲ್ಲೀನರಾಗಲು
ಒಮ್ಮೆಯಾದರು ಭೇಟಿ ಕೊಡದೆ ಇರಬೇಡಿ..
ತೀರ್ಥಹಳ್ಳಿಯ ದೇವಂಗಿ ಮಾರ್ಗದಿಂದ ೨೦ಕಿಲೋಮೀಟರು ಅನತಿಯಲ್ಲಿದೆ
ಕುಪ್ಪಳಿ
ಹಿರೇಕೊಡಿಗೆ,ಕೊಪ್ಪ ತಾಲ್ಲೂಕು
ಚಿಕ್ಕಮಗಳೂರು .
Leave a comment