‘ವನಚೇತನ ‘ನಿಸರ್ಗಧಾಮ’ – ತೀರ್ಥಹಳ್ಳಿಯಿಂದ 26ಕಿಮೀ ದೂರದಲ್ಲಿಯ ‘ಹೆದ್ದೂರು‘-ಗ್ರಾಮದಲ್ಲಿ *ಆರ್ಟ್ ಎಸ್ಟೇಟ್ –ಕಲಾ ನಿಕೇತನ*… ತನ್ನ ಸ್ವಂತ ಜಮೀನಿನಲ್ಲಿ ಸ್ವಂತ ಕಲೆಯ ಪ್ರಾರಂಭಿಸಿದ ಬ್ರಹ್ಮಾಚಾರ್ಯ ಲೇಖಕ – ಶ್ರೀ ದೇವಿತೋ ನಾಗೇಶರವರು … ಇವರ ಇಡೀ ಜೀವನವನ್ನ ಕಲಾಮಾತೆಯ ಆರಾಧನೆಯಲ್ಲೇ ಕಳೆಯುತಿರುವ ಅವರು ಎಲ್ಲರಿಗೂ ಉಚಿತವಾಗಿ ಅವರ ಕಲಾಮಂಟಪಕ್ಕೆ ಆಹ್ವಾನವಿರಿಸಿದ್ದಾರೆ ,
ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದಲ್ಲಿ ವಿಶೇಷ ರೊಮಾಂಚನವೆನಿಸುವ ಆಟಗಳನ್ನು ತಿಳುವಳಿಕೆಯನ್ನು ನೀಡುವರು …
ಅವರಾ ಕಲಾಕುಟಿರದಲ್ಲಿ ಅನೇಕ ಬಗೆಯ ವಸ್ತು -ವೈಶಿಷ್ಟ್ಯವೆನ್ನಿಸುವ ವಸ್ತುಗಳನ್ನು ಸಂಗ್ರಹಿಸಿದ್ದು …
ನಮಗೇನೆ ವಿಚಿತ್ರವೆನಿಸುತ್ತದೆ ., ಅವರ ಅನುಭವ ಮಂಟಪವೇ ಅದು ಸರಿ …
ತಮ್ಮದೇ ಕಲಾವಂತಿಕೆಯಿಂದ –ಕುಸುರಿ, ಶಿಲ್ಪಕೆತ್ತನೆ ,ಹಾಗು ತ್ಯಾಜ್ಯ ವಸ್ತುಗಳಿಂದ , ಸೊಗಸಾದ ಚಿತ್ರಣವನ್ನೇ ಪ್ರಕೃತಿ ಮಡಿಲಿನಲ್ಲಿ ಸೃಷ್ಟಿಸಿದ್ದಾರೆ ,
ಒಮ್ಮೆ ಭೇಟಿ ನೀಡಿ ….
Recent Comments