೦೫-ಸೆಪ್ಟೆಂಬರ ದಿನ
ಮನೆಯಂಗಳದಲ್ಲೊಂದು ಶಾಲೆ, ತಂದೆ ತಾಯಿ ಬಂಧುಗಳೇ ಅಲ್ಲಿ ಮಾರ್ಗದರ್ಶಕರುಗಳು
ಬಿದ್ದಾಗ-ಎದ್ದಾಗ ಗದ್ದುಗೆಗೇರಿಸಿ ಮೆರೆಸಿ ಹಾರೈಸಿ ನಡತೆಗಳನುಸುರಿ ನಡೆಸುವರು ..
ರಸ್ತೆಗಿಳಿದ ಕಾಲುಗಳು ಎಡವಿದಾಗ ಎಡವದಂತೆ ಸಂಭಾಳಿಸಲನುವು ಕುಟುಂಬ ಜ್ಞಾನ,
ಎಡವಿದ್ದು ಕಲ್ಲಾದರೆ ಬದಿಗೊಮ್ಮೆ ಸರಿಸಿ ಹೋಗು, ಕಲ್ಲಲ್ಲವೆಂದರೆ ನಡೆಯ ನಡತೆಯ ಬದಲಿಸಿಕೊಳ್ಳೆನ್ನುವುದೇ ಅರಿವಿನ ಜ್ಞಾನ,
ಗುರುವೇ ಅರಿವು – ಅರಿವೇ ಗುರುವು.
ಜೀವನವೆಂಬ ಹೂದೋಟದಲಿ ಬಣ್ಣಗಳಣ ಹೂವ ಅರಳಿಸಿ, ಕಳೆ ಕಿತ್ತು, ಬುಡಕ್ಕೊಂದಷ್ಟು ಅರಿವು, ಕಾಂಡಕ್ಕೊಂದಷ್ಟು ಜ್ಞಾನ, ಮೊಗ್ಗಾಗಿ-ಹೂವಾಗಿ-ಕಾಯಾಗುವಲ್ಲೊಂದು – ವಿಜ್ಞಾನ ಸುಜ್ಞಾನದ ನೀರುಣಿಸಿ, ಸದಾ ಹಸಿರಾಗಿರಲೆಂದು ಕಾಯಕಲ್ಪಗಳ ಕಲಿಸಿ, ಬೃಹದ್ಜೀವನಕೆ ನವೀಕರಣದ ಕೊಡುಗೆಗಳಿಗೆ ಮಹಾನ್ಪಾತ್ರದಾರಿ ಈ ಗುರುವು.
‘ಗುರು ಎಂದಾಕ್ಷಣ ಶಿಕ್ಷಕರೇ ಎಂದೆನ್ನಲಾಗುವುದಿಲ್ಲ, ನಾವೇನನ್ನು ಕಲಿತಿದ್ದೇವೆ , ಯಾವುದರಿಂದ ಬದಲಾವಣೆಯಾ/ಗಿದೆ/ಗುತ್ತದೆ ಎಂಬುದನ್ನು ಅರಿಯುವ ಪರ್ವಕಾಲವೇ ಗುರು’
ಆದರೂ
‘ಮೊದಲ ಅಕ್ಷರ ಬೀಜಗಳನ್ನೆದೆಗೆ ಬಿತ್ತಿರುವ ಗುರುವೃಂದದವರಿಗಿಂದು ವಿನಂಮ್ರತೆಯ ನಮನ’🌿🙏
Leave a Reply